Regional

ದಮ೯ಪ್ಪ ಸಾಹೇಬರೆಂದರೆ ರಾಜಕುಮಾರ್ ಇದ್ದ೦ತೆ ಅವರ ಜೀವನ ಅಷ್ಟು ಶಿಸ್ತುಬದ್ದ.

ಆನಂದಪುರ: ದಮ೯ಪ್ಪ ಸಾಹೇಬರೆಂದರೆ ರಾಜಕುಮಾರ್ ಇದ್ದ೦ತೆ ಅವರ ಜೀವನ ಅಷ್ಟು ಶಿಸ್ತುಬದ್ದ.

1978ರಲ್ಲಿ ನನ್ನನ್ನು ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ 8ನೇ ತರಗತಿ ಇಂಗ್ಲೀಷ್ ಮೀಡಿಯಂ ಗೆ ನನ್ನ ತಂದೆ ಸೇರಿಸಿದ್ದರು, ಅಲ್ಲಿದ್ದ ಮ್ಯಾನೇಜರ್ ನಮ್ಮೂರ ಸಮೀಪದ ನಂದಿಗದ ಗುಂಡಪ್ಪನವರು (ಸಾಗರದ ಗೋಪಾಲರ ದೊಡ್ಡಪ್ಪ) ಬಿಟ್ಟರೆ ಬೇರಾರು ಗೊತ್ತಿರಲಿಲ್ಲ.
7 ನೇ ತರಗತಿ ತನಕ ಇಂಗ್ಲೀಷ್ ಮೀಡಿಯಂ ಓದಿದವರು 8ನೇ ತರಗತಿಗೆ ಇಲ್ಲಿಗೆ ಮತ್ತು ಅನುಕೂಲಸ್ಥರು ಪ್ರಭಾವಿಗಳು ಖಾಸಾಗಿ ಶಾಲೆ ಆದ ಶಿವಲಿಂಗಪ್ಪ ಹೈಸ್ಕೂಲ್ ಗೆ ಸೇರಿಸುತ್ತಿದ್ದರು.
ನಮ್ಮ ಊರಿನ ಹೈಸ್ಕೂಲ್ ಶಿಕ್ಷಕರು ನಮ್ಮ ತಂದೆಗೆ ಸಾಗರದ ಮುನ್ಸಿಪಲ್ ಹೈಸ್ಕೂಲ್ ಸೇರಿಸಲು ಸಲಹೆ ನೀಡಿ ಅವರ ಮಗನನ್ನ ಈ ಖಾಸಾಗಿ ಶಾಲೆಗೆ ಸೇರಿಸಿದ್ದರ ಉದ್ದೇಶ ಅನೇಕ ವರ್ಷದ ನಂತರ ಗೊತ್ತಾಯಿತು.
ಹಳ್ಳಿಯಲ್ಲಿ ಮಾತೃ ಬಾಷೆ ಕನ್ನಡ ಮಾದ್ಯಮದಲ್ಲಿ ಓದಿ ಶಾಲೆಗೆ ಪ್ರಥಮರಾಗುತ್ತಿದ್ದ ನನಗೆ ಸಾಗರದ 8ನೇ ತರಗತಿ ಒಂದು ರೀತಿ ಉಸಿರುಕಟ್ಟಿಸುತ್ತಿತ್ತು, ಇಂಗ್ಲೀಷ್ ಮಾಧ್ಯಮದಲ್ಲೇ ಒಂದನೇ ತರಗತಿಯಿಂದ ಓದಿ ಬಂದವರ ನಡುವೆ 5 ನೇ ತರಗತಿಯಿಂದ ಮಾತ್ರ ಒಂದು ವಿಷಯ ಇಂಗ್ಲೀಷ್ ಕಲಿಯಲು ಪ್ರಾರ೦ಬಿಸಿ 8 ನೇ ತರಗತಿಗೆ ದಿಡೀರ್ ಇಂಗ್ಲೀಷ್ ಮಾಧ್ಯಮಕ್ಕೆ ಬಂದಿದ್ದು ನನಗೆ ಕೀಳರಮಿ ಉಂಟು ಮಾಡಿತ್ತು.
ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಆ ಪರಿಸ್ಥಿತಿಯಲ್ಲಿ ನನ್ನದು ಅಂಗಿ ಚಡ್ಡಿ ಮತ್ತು ಹವಾಯಿ ಚಪ್ಪಲಿ ಅನೇಕರ ಗೇಲಿಗೂ ಕಾರಣ ಆಗುತ್ತಿತ್ತು.
ಆ ಸಂದಭ೯ದಲ್ಲಿ ಹೊಸದಾಗಿ 8ನೇ ತರಗತಿಗೆ ಸೇರಿದವರಿಗೆ ಒಂದು ಸಿಡಿಲಿನಂತ ಸುದ್ದಿ ಬಂತು, NCC ಉಸ್ತುವಾರಿ ನೋಡುವ DKR ಅಂತ ತುಂಬಾ ಶಿಸ್ತಿನ ಮಾಸ್ಟರ್ ಬರುತ್ತಾರೆ NCC ಗೆ ಸೆಲೆಕ್ಟ್ ಮಾಡುತ್ತಾರೆ ಬಾನುವಾರ ಬೇರೆಯವರಿಗೆ ರಜಾ ಇದ್ದರೆ NCC ಅವರಿಗೆ ಮಾತ್ರ ರಜಾ ಇಲ್ಲ DKR ಮಿಲ್ಟ್ರಿಯಂತೆ ಟ್ರೈನಿಂಗ್ ಕೊಡ್ತಾರೆ ಅಂತ.
ಆ ದಿನ ಬಂತು DKR ಬಂದವರೆ ದ್ಯೆಹಿಕವಾಗಿ ಗಟ್ಟಿ ಇದ್ದವರನ್ನ ಆಯ್ಕೆ ಮಾಡಿ ಅವರ NCC ಕಛೇರಿಗೆ ಕರೆದುಕೊಂಡು ಹೋದರು.
ನನಗೆ ಜೀವ ಬಾಯಿಗೆ ಬಂದಿತ್ತು ಮೊದಲ ಕಾರಣ ಪ್ರತಿ ದಿನ ಸಾಗರಕ್ಕೆ ಆನಂದಪುರದಿಂದ ರೈಲಿನಲ್ಲಿ ಸಾಗರಕ್ಕೆ ಪಾಸ್ ಮೂಲಕ ಪ್ರಯಾಣಿಸುತ್ತಿದ್ದ ನಮಗೆ ಬಾನುವಾರ ಪಾಸ್ ಇರಲಿಲ್ಲ ಮತ್ತು ಪೂಣ೯ ಹಣ ಕೊಟ್ಟು ಪ್ರಯಾಣಿಸುವ ಅಥಿ೯ಕ ಸಬಲತೆ ಮನೇಲಿ ಇರಲಿಲ್ಲ.
ಒಬ್ಬೊಬ್ಬರನ್ನೆ ಸಂದಶ೯ನ ಮಾಡಿ ಸಮವಸ್ತ್ರ ನೀಡುತ್ತಿದ್ದರು ಆಗ ನನ್ನ ಸರದಿ ಬಂತು “ಸಾರ್ ನನಗೆ NCC ಸೇರಲು ವಿನಾಯಿತಿ ನೀಡಿ ” ಅಂದೆ ತಕ್ಷಣ ಬಂದೂಕಿನ ಗುಂಡಿನಂತ ಪ್ರಶ್ನೆಗಳು ಬಂದಿತು.
ಯಾವ ಕಾರಣವೂ ಅವರಿಗೆ ಸಕಾರಣ ಆಗಿಲ್ಲ ಅಂತ ಅವರ ಮುಖಭಾವ ಮತ್ತು ಪ್ರಶ್ನೆಗಳಿಂದ ನನಗೆ ವೇದ್ಯ ಆಯಿತು ನಂತರ ಯಾವ ಊರು? ಯಾರ ಮನೆ? ಎಂಬ ಪ್ರಶ್ನೆಗೆ ನನ್ನ ಉತ್ತರ ಅವರಿಗೆ ಸಮಾದಾನ ಆಯಿತು, ನನ್ನ ತಂದೆ ಅವರಿಗೆ ಹೇಗೆ ಪರಿಚಯ ಗೊತ್ತಾಗಲಿಲ್ಲ ಆದರೆ ನನ್ನನ್ನ NCC ಪಟ್ಟಿಯಿಂದ ಬಿಟ್ಟು ಕಳಿಸಿದರು.
ನಂತರ ಜಿಲ್ಲಾ ಪಂಚಾಯತ್ ಸದಸ್ಯನಾದ ಮೇಲೆ ಗೊತ್ತಾಯಿತು ಶಿವಮೊಗ್ಗ ಜಿಲ್ಲೆಯ ರಿಫ್ಪನ್ ಪೇಟೆ ಸಮೀಪದ ಕಾಳೇಶ್ವರ ಊರು ದಮ೯ಪ್ಪ ಸಾಹೇಬರ ಊರು, ಪ್ರೌಢ ಶಿಕ್ಷಣ ಆನಂದಪುರದಲ್ಲಿ ಮಾಡಿದರು ಅದಕ್ಕಾಗಿ ಆನಂದಪುರಂ ಸಮೀಪದ ಗಿಳಾಲಗುಂಡಿಯ ಅವರ ಮಾವನ ಮನೆಯಿಂದ ದಿನಾ 10 ಕಿ.ಮಿ. ನಡೆದು ಬರುತ್ತಿದ್ದರು, ಇವರ ಮಾವನವರು ನಮ್ಮ ತಂದೆಗೆ ಆಪ್ತರಾಗಿದ್ದರ೦ತೆ. ಪ್ರತಿಭಾವಂತರಾದ ಅವರು ಸಾಗರದ ಮುನ್ಸಿಪ್ ಹೈಸ್ಕೂಲ್ ಶಿಕ್ಷಕರಾಗಿದ್ದಾಗಲೇ ಕೆ.ಎ.ಎಸ್ ಮಾಡಿ ಸಹಕಾರಿ ಇಲಾಖೆಯ ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್ ಆಗಿದ್ದಾರಂತ.
ಜಿಲ್ಲಾ ಪಂಚಾಯತ್ ಸಭೆಗೆ ಅವರು ಬರಬೇಕಾತ್ತಿತ್ತು ನಾನೇ ಅವರಲ್ಲಿ ಹೋಗಿ ಪರಿಚಯಿಸಿಕೊಂಡೆ ಅವರಿಗೂ ಅವರ ಶಿಷ್ಯ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ್ನ ನಡುಗಿಸುತ್ತಿದ್ದು ಸಂತೋಷ ಉಂಟು ಮಾಡಿತ್ತು.
ಮುಂದಿನ ದಿನಗಳಲ್ಲಿ ಇವರು ವಿದಾನ ಪರಿಷತ್ ಸಭಾಧ್ಯಕ್ಷರಾದ DH ಶಂಕರ ಮೂತಿ೯, ಮಂತ್ರಿ ಹರತಾಳು ಹಾಲಪ್ಪರ ವಿಶೇಷಾಧಿಕಾರಿಗಳಾಗಿ ಕಾಯ೯ನಿರ್ವಹಿಸಿದರು ಈಗ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀನಿವಾಸ್ ಪೂಜಾರರ ವಿಶೇಷಾಧಿಕಾರಿಗಳಾಗಿದ್ದಾರೆ ನಾನು ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿದ ಕಲ್ಯಾಣ ಮಂಟಪ ಉದ್ಘಾಟಿಸಲು ಆಹ್ವಾನಿಸಿದ್ದೆ ಬಂದಿದ್ದರು ಕಳೆದ ವರ್ಷ ನನ್ನ ಮಗಳ ಮದುವೆಗೆ ಆಹ್ವಾನಿಸಲು ಸಾಧ್ಯವಾಗಿರಲಿಲ್ಲ ಅಂಚೆಯಲ್ಲಿ ಆಹ್ವಾನ ಪತ್ರಿಕೆ ಕಳಿಸಿದ್ದೆ ಬರುತ್ತಾರೆಂದು ನಿರೀಕ್ಷಿಸಿಯೇ ಇರಲಿಲ್ಲ ಮಹೂತ೯ದಲ್ಲಿ ಅವರಿದ್ದರು.
ನನ್ನ ಮತ್ತು ಅವರ ಗುರು ಶಿಷ್ಯರ ಸಂಬಂದ ಎಷ್ಟೇ ಸಂಕ್ಷಿಪ್ತ ಅಂದರೂ ವಿವರಿಸುವಲ್ಲಿ ದೀಘ೯ವಾಗಿ ಆಯಿತು.
ಅವರು ನನ್ನ ಕಾದಂಬರಿ ಓದಿ ವಿಮಷೆ೯ ಅಂಚೆ ಮೂಲಕ ಕಳಿಸಿದ್ದಾರೆ ವಿಶೇಷ ಅಂದರೆ ಅವರು ಆನಂದಪುರದಲ್ಲಿ ತಮ್ಮ ಪ್ರೌಡ ಶಾಲಾ ವ್ಯಾಸಂಗದಲ್ಲಿ ಬಿಡುವಿದ್ದಾಗಲೆಲ್ಲ ಚಂಪಕ ಸರಸ್ಸುವಿನ ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದರಂತೆ ಆದರೆ ಚಂಪಕ ಸರಸ್ಸುವಿನ ಮಾಹಿತಿ ನೀಡುವವರಿರಲಿಲ್ಲ ಆ ದಿನಗಳಲ್ಲಿ ಅಂತ ಬರೆದಿದ್ದಾರೆ.
ದೊಡ್ಡವರಾದ ಅವರ ಈ ಪ್ರತಿಕ್ರಿಯೆಗೆ ನಾನು ಆಭಾರಿ.

ಲೇಖನ: ಅರುಣ್ ಪ್ರಸಾದ್

Click to comment

Leave a Reply

Your email address will not be published.

one × three =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App

© 2018 | All Rights Reserved

To Top
WhatsApp WhatsApp us