ಬೇಳೂರು ಗೋಪಾಲಕೃಷ್ಣ ಸಿಗಂದೂರು ದೇವಸ್ಥಾನದಿಂದ ಕಿಕ್’ಬ್ಯಾಕ್ ಪಡೆದಿದ್ದಾರೆ ಎನ್ನುವ ಚೇತನರಾಜ್ ಕಣ್ಣೂರು ಹೇಳಿಕೆಗೆ ಖಂಡನೆ.
ಇತ್ತಿಚೆಗೆ ಸಿಗಂದೂರು ದೇವಸ್ಥಾನದ ವಿಚಾರವಾಗಿ ಸಾಗರದ ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಿಗಂದೂರು ದೇವಸ್ಥಾನದಿಂದ ಕಿಕ್’ಬ್ಯಾಕ್ ಪಡೆದಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಇದನ್ನು ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗ ಖಂಡಿಸುತ್ತದೆ. ಮತ್ತು ಇಂತಹ ಗಂಭೀರ ಆರೋಪ ಮಾಡಿದ ಚೇತನರಾಜಕಣ್ಣೂರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಬಳಗದ ಪ್ರಮುಖ ಅಶೋಕ್ ಬೇಳೂರು ಇಂದು ನಡೆಸಿದ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಹಾಗೇಯೇ ಚೇತನರಾಜಕಣ್ಣೂರು ಸಿಗಂದೂರು ದೇವಸ್ಥಾನದ ವಿಷಯವನ್ನು ಕಾಂಗ್ರೇಸ್ ಬ್ರಾಹ್ಮಣ ಮತ್ತು ಈಡಿಗ ಸಮುದಾಯದ ಮಧ್ಯೆ ಒಡಕು ಮೂಡಿಸಿ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ ಎಂದು ಹೇಳಿದ್ದಾರೆ. ಇದು ಕ್ಷುಲ್ಲಕ ಹೇಳಿಕೆ ಎಂದು ಸಹ ಅವರು ಹೇಳಿದ್ದಾರೆ.
ಬಳಗದ ಮತ್ತೋರ್ವ ಪ್ರಮುಖ ನಾಗರಾಜಸ್ವಾಮಿ ಮಾತನಾಡಿ, ಚೇತನರಾಜಕಣ್ಣೂರು ತಾವು ರಾಜಕೀಯದಲ್ಲಿ ಎಲ್ಲಿದ್ದರು? ಹೇಗಿದ್ದರು? ಯಾರು ಅವರನ್ನು ಈ ಮಟ್ಟಕ್ಕೆ ಬೆಳೆಸಿದವರು ಎಂದು ಹಿಂತಿರುಗಿ ನೋಡಿಕೊಳ್ಳಲಿ, ಈ ರೀತಿಯ ಗಂಭೀರ ಹೇಳಿಕೆ ನೀಡಿರುವುದನ್ನು ನಾನು ಸಹ ಖಂಡಿಸುತ್ತೇನೆ, ಮತ್ತು ಮುಂದಿನ 10 ದಿನಗಳಲ್ಲಿ ಈ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು.
ಇಲ್ಲದಿದ್ದಲ್ಲಿ ನಮ್ಮ ಬಳಗದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದರು. ಚೇತನರಾಜ್ ಈ ರೀತಿಯ ಹೇಳಿಕೆ ನೀಡುವಾಗ ಅವರ ಪಕ್ಕದಲ್ಲಿ ಸಾಗರ ನಗರ ಮಂಡಲದ ಅಧ್ಯಕ್ಷ ಕೆ.ಆರ್. ಗಣೇಶ್’ಪ್ರಸಾದ್ ಸಹ ಪಕ್ಕದಲ್ಲಿದ್ದರು. ಅವರು ಬೇಳೂರು ಗೋಪಾಲಕೃಷ್ಣರವರಿಗೆ ಪಕ್ಷದಲ್ಲಿದ್ದಾಗ ಬಲ್ಲವರು. ಗೋಪಾಲಕೃಷ್ಣ ವ್ಯಕ್ತಿ ಮತ್ತು ವ್ಯಕ್ತಿತ್ವ ಅರಿತವರಾಗಿದ್ದರೂ ಸಹ ಈ ರೀತಿಯ ಹೇಳಿಕೆ ನೀಡುವಾಗ ಮೌನ ಮುರಿಯದೇ ಸುಮ್ಮನಿದ್ದದ್ದು ಬಿಜೆಪಿ ಸಂಸ್ಕ್ರತಿಯನ್ನು ತೋರಿಸುತ್ತದೆ ಎಂದು ಹೇಳಿದರು. ಕಾಂಗ್ರೇಸ್ ಎಸ್.ಸಿ. ಘಟಕದ ಅಧ್ಯಕ್ಷ ಸೋಮಶೇಖರ ವೀರಾಪುರ ಮಾತನಾಡಿ, ಚೇತನರಾಜ್ ಕಣ್ಣೂರು ತಾವು ಇಂದು ರಾಜಕೀಯವಾಗಿ ಜನರಲ್ಲಿ ಬಿಂಬಿತರಾಗಿದ್ದಾರೆ. ಅವರು ಗೋಪಾಲಕೃಷ್ಣ ಬೇಳೂರು ಅವರ ಮೇಲೆ ಈ ರೀತಿ ಆರೋಪ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯರಾಮ್ ಸೂರನಗದ್ದೆ ರಕ್ಷಣಾ ವೇದಿಕೆ, ಅಶೋಕ್ ಬೇಳೂರು ಯುವ ಮುಖಂಡರು, ನಾಗರಾಜಸ್ವಾಮಿ, ಯಶ್ವಂತ್ ಪಣಿ ಯೂತ್ ಕಾಂಗ್ರೆಸ್ ನಗರ ಅಧ್ಯಕ್ಷರು ,ಗಣಪತಿ ಬ್ಯಾಂಕಿನ ನಿರ್ದೇಶಕ ರಮೇಶ್, ಸೋಮಶೇಖರ ವೀರಾಪುರ, ರಾಘವೇಂದ್ರ ದೈವಜ್ಞ ಸಮಾಜದ ಮುಖಂಡರು, ಜಗದೀಶ್ ಕುರುಡೆಕರ್ ದೈವಜ್ಞ ಸಮಾಜದ ಅಧ್ಯಕ್ಷರು,ಕಿರಣ್ ದೊಡ್ಮನಿ ಯುವ ಕಾಂಗ್ರೆಸ್ ಮುಖಂಡರು ಮತ್ತು ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ವರದಿ: ಹರ್ಷ ಸಾಗರ