ಬೆಂಗಳೂರು: ಶಾಸಕ ಆರ್. ಅಶೋಕ್ ಅವರ ವಾರ್ಡ್ಗಳಿಗೆ ಭೇಟಿ.
ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಸಚಿವರು ಹಾಗೂ ಪದ್ಮನಾಭನಗರದ ಶಾಸಕರಾದ ಆರ್. ಅಶೋಕ್ ಇಂದು ಬೆಳ್ಳಂಬೆಳಗ್ಗೆ ತಮ್ಮ ಕ್ಷೇತ್ರ ವ್ಯಾಪ್ತಿಯ ಹಲವು ಜಾಗಗಳಿಗೆ ಭೇಟಿ ನೀಡಿ, ಜನರ ಕುಂದು ಕೊರತೆ ವಿಚಾರಿಸಿದರು.
ಬೃಹತ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರ (ಕಾರ್ಪೊರೇಟರ್) ಕಾರ್ಯಾವಧಿ ಮುಗಿದಿದ್ದು ಮುಂದಿನ ಚುನಾವಣೆಯವರೆಗೂ ಅವರ ನಿಭಾಯಿಸುತ್ತಿದ್ದ ಕೆಲಸ- ಜಾವಾಬ್ದಾರಿಗಳನ್ನೆಲ್ಲಾ ಆಲ್ಲಿನ ಸ್ಥಳೀಯ ಶಾಸಕರು ನಿಭಾಯಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಆರ್. ಅಶೋಕ್ ಅವ್ರು ಪದ್ಮನಾಭ ನಗರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಇಸ್ರೋ ಬಡಾವಣೆಗೆ ಭೇಟಿ ನೀಡಿ ಅಲ್ಲಿಯ ನಿವಾಸಿಗಳೋ0ದಿಗೆ ತುಸು ಕಾಲ ಚರ್ಚೆ ನಡೆಸಿದ್ರು. ಇಸ್ರೋ ಬಡಾವಣೆಯ ಪ್ರೋ. ಸತೀಶ್ ಧವನ್ ಉದ್ಯಾನ ವನಕ್ಕೆ ಭೇಟಿ ನೀಡಿ ಮೊದಲಿಗೆ ಆಲ್ಲಿ ಸಾಗುತ್ತಿರುವ ತೋಟದ ಕೆಲಸದ ಕಡೆಗೆ ಗಮನ ಹರಿಸಿ, ನಂತರ ಇಸ್ರೋ ಬಡಾವಣೆಯ(Space colony Welfare Association) ಪ್ರೆಸಿಡೆಂಟ್ ಹಾಗೂ ಸೆಕ್ರೆಟರಿ ಜೊತೆಗೆ ಇನ್ನು ಮುಂದಾಗಬೇಕಿರುವ ಕೆಲಸಗಳು, ಯೋಜನೆಗಳು, ಬಡಾವಣೆಯಲ್ಲಿ ಆಗ ಬೆಕಿರುವ ಸುಮಾರು ಅವಶ್ಯ ಸುಧಾರಣೆಗಳನ್ನ ಅವರ ಮುಂದಿಟ್ಟರು. ಕೂಡಲೇ ಎಲ್ಲದಕ್ಕೂ ಸ್ಪಂದಿಸಿ,ಎಲ್ಲಾ ಬೇಡಿಕೆಗಳಿಗೆ ಅಗತ್ಯವಾದ ಕಾರ್ಯ ಅತಿ ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ತಿಳಿಸಿದರು. ಭಾರತದ ಹಿರಿಯ ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿಗಳು ವಾಸಿಸುವ ಕಾಲೋನಿ ಇದಾಗಿದೆ.
ವರದಿ: P. ಘನಶ್ಯಾಮ್ – ಬೆಂಗಳೂರು