ಬೆಂಗಳೂರು : ಇಡೀ ದೇಶದಲ್ಲೇ ಅನ್ನದಾತರಿಗೆ ದೊಡ್ಡ ಸಂಕಟ ಬಂದಿದೆ – ಡಿಕೆ ಶಿವಕುಮಾರ್
ಇಡೀ ದೇಶದಲ್ಲೇ ಅನ್ನದಾತರಿಗೆ ದೊಡ್ಡ ಸಂಕಟ ಬಂದಿದೆ. ನರೇಂದ್ರ ಮೋದಿ ಸರ್ಕಾರ ಬಂಡವಾಳಶಾಹಿಗಳ ಕೈಗೆ ರೈತರ ಬದುಕನ್ನು ಕೊಡುವ ಯೋಜನೆ ಹಾಕಿಕೊಂಡು, ರೈತರು-ಕಾರ್ಮಿಕರಿಗೆ ಮಾರಕವಾದಂತಹ ಕಾಯಿದೆಗಳನ್ನು ಜಾರಿಗೆ ತರಲು ಹೊರಟಿದೆ. ಇದರ ವಿರುದ್ಧ ರೈತರು ಧ್ವನಿ ಎತ್ತಬೇಕು. ನಾವು ನಿಮ್ಮೊಂದಿಗೆ ಇದ್ದೇವೆ – ಡಿಕೆ ಶಿವಕುಮಾರ್
ದೇಶದ ರೈತರು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು, ಈ ನಿಟ್ಟಿನಲ್ಲಿ ನಾವು ರೈತರ ಜೊತೆಗೆ ನಿಂತು ಹೋರಾಟ ಮಾಡಬೇಕಿದೆ. ‘ರೈತರ ಬದುಕು ದೇಶದ ಬದುಕು, ರೈತರ ಶಕ್ತಿ ನಮ್ಮ ಶಕ್ತಿ’ ಈ ಕಾರಣಕ್ಕಾಗಿ ಎಂದಿನಂತೆ ಈಗಲೂ ಕಾಂಗ್ರೆಸ್ ಪಕ್ಷ ರೈತರ ಜೊತೆಗೆ ನಿಲ್ಲುತ್ತದೆ.
ವರದಿ: ಸಿಸಿಲ್ ಸೋಮನ್