ಸಾಗರ: ಸಾಗರ ತಾ. ಕಸಬಾ, ಆವಿನಹಳ್ಳಿ ಹಾಗೂ ಹೊಸನಗರ ತಾ. ಹೊಸನಗರ ಪಟ್ಟಣ, ಕಸಬಾ ಮತ್ತು ಕೆರೆಹಳ್ಳಿ ಹೋಬಳಿಗಳಿಗೆ ಕುಡಿಯುವ ನೀರು ಸರಬರಾಜು ವಿಶೇಷ ಯೋಜನೆ.
ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರ ತಾ. ಕಸಬಾ, ಆವಿನಹಳ್ಳಿ ಹಾಗೂ ಹೊಸನಗರ ತಾ. ಹೊಸನಗರ ಪಟ್ಟಣ, ಕಸಬಾ ಮತ್ತು ಕೆರೆಹಳ್ಳಿ ಹೋಬಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡವ ವಿಶೇಷ ಯೋಜನೆಗೆ, ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು,ಸದರಿ ಯೋಜನೆಗೆ ಡಿ.ಪಿ.ಆರ್ ತಯಾರಿಸಲು 15 ಲಕ್ಷ ರೂ ಗಳನ್ನು ಮಂಜೂರು ಮಾಡಲು ಮಾನ್ಯ ಮುಖ್ಯಮಂತ್ರಿಗಳು ಸಂಬಂಧಪಟ್ಟ ಇಲಾಖೆಗೆ ಅದೇಶಿಸಿದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ.
ವರದಿ: ಗೌತಮ್ ಕೆ.ಎಸ್