ಸಾಗರ: ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದಿಂದ ಆಚರಿಸುವ ಶಿವಾಜಿ ಜಯಂತಿಗೆ ಬಿಜೆಪಿ ಅಡ್ಡಗಾಲು.
ಮಾರ್ಚ್ 31ರಂದು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದಿಂದ ನಡೆಸಲು ಉದ್ದೇಶಸಿರುವ ಶಿವಾಜಿ ಜಯಂತಿಗೆ ಬ್ರೇಕ್ ಹಾಕುವ ಯತ್ನವೊಂದು ಭಾರತೀಯ ಜನತಾ ಪಕ್ಷ ಮಾಡುತ್ತಿದೆ ಎಂಬ ಮಾತು ಹರಿದಾಡುತ್ತಿದೆ. ಮಾರ್ಚ್ 20 ರಂದು ಮಾಡಬೇಕಾದ ಶಿವಾಜಿ ಜಯಂತಿ ಶಿವಾಜಿ ಅಭಿಮಾನಿ ಬಳಗದ್ದಾದರೂ ಸಹ ಇದು ಸಂಪೂರ್ಣ ಬಿಜೆಪಿ ಬೆಂಬಲಿತವಾಗಿದೆ ಎಂದು ಹೇಳಲಾಗಿದೆ. ಇದರ ಬಗ್ಗೆ ಈಗಾಗಲೇ ಮಿಟಿಂಗ್ ಕರೆಯಲಾಗಿದ್ದು, ಸಾಗರದ ಬಜರಂಗದಳದ ಪ್ರಮುಖರು ಭಾಗಿಯಾಗಿದ್ದಾರೆ. ಅಲ್ಲೇನು ನಡೆಯುತ್ತದೆಯೋ ಅದರ ಮೇಲೆ ಶಿವಾಜಿ ಜಯಂತಿಯನ್ನು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಆಚರಿಸುತ್ತವೆಯೋ, ಇಲ್ಲವೊ ನೋಡಬೇಕಿದೆ.
ಮಾರ್ಚ್ 20ರಂದು ಆಚರಿಸಬೇಕಿದ್ದ ಶಿವಾಜಿ ಅಭಿಮಾನಿ ಬಳಗದ ಉತ್ಸವ ಮಂಕಾಗಲು ಬಿಡಬಾರದು ಎಂಬ ಉದ್ದೇಶವನ್ನು ಈಗಾಗಲೇ ಬಿಜೆಪಿ ಹೊಂದಿದ್ದು ಇದರಿಂದ ಸಾಗರದಲ್ಲಿ ವಿಹಿಂಪ ಮತ್ತು ಬಜರಂಗದಳ ಕಾರ್ಕರ್ತರು ಕೆಂಡಾಮಂಡಲಗೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ವರದಿ: ಸಿಸಿಲ್ ಸೋಮನ್