ಬೆಂಗಳೂರು: ಬಿಜೆಪಿ ಸರ್ಕಾರ ಪ್ರತಿನಿತ್ಯ ಜನರ ಮೇಲೆ ತೆರಿಗೆ ಹೊರೆಯನ್ನು ವಿವಿಧ ರೀತಿಯಲ್ಲಿ ಹೊರಿಸುವ ಕಾರ್ಯತಂತ್ರವನ್ನು ರೂಪಿಸಿ ಜನಗಳಿಗೆ ಹಿಂಸಿಸುವ ತೆರಿಗೆಯನ್ನು ವಿಧಿಸುತ್ತಿದೆ ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಪ್ರಯತ್ನಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ ಕೂಡಲೇ ಪೇ& ಪಾರ್ಕಿಂಗ್ ಶುಲ್ಕದ ಹೊಸ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿ ವಿನೂತನ ಪ್ರತಿಭಟನೆಯನ್ನು 12/2/2021 ಇಂದು ನಡೆಸಲಾಯಿತು.
ಪೇ & ಪಾರ್ಕಿಂಗ್ ವ್ಯವಸ್ಥೆಯಲ್ಲಿ ಜನರಿಗೆ ದಿನನಿತ್ಯ ತೊಂದರೆ ಕಿರಿಕಿರಿ ಉಂಟಾಗುತ್ತದೆ ಎಂಬ ಕಾರಣಕ್ಕಾಗಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಾರ್ಕಿಂಗ್ ಶುಲ್ಕವನ್ನು ರದ್ದು ಪಡಿಸಲಾಗಿತ್ತು ಈಗ ಮತ್ತೆ ಬಿಜೆಪಿ ಪಾರ್ಕಿಂಗ್ ಶುಲ್ಕವನ್ನು ಜಾರಿಗೊಳಿಸುವುದರ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಹೊ ಪಾರ್ಕಿಂಗ್ ನೀತಿ ಜನ ವಿರೋಧಿ ನೀತಿಯಾಗಿದೆ ಸರ್ಕಾರ ಇಂತಹ ಹೊಸ ನೀತಿಗಳನ್ನು ತರುವ ಮುಂಚಿತವಾಗಿ ನಗರದ ಜನ ಸಾಮಾನ್ಯರೊಂದಿಗೆ ಚರ್ಚಿಸುವ ಸೌಜನ್ಯವೂ ಸಹ ಈ ಬಿಜೆಪಿ ಸರ್ಕಾರಕ್ಕೆ ಇಲ್ಲದಂತಾಗಿದೆ
ಈಗಾಗಲೇ ಕರೋನಾ ಸಂಕಷ್ಟದಿಂದ ಜನ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಇಂತಹ ತೆರಿಗೆ ನೀತಿಯನ್ನು ಜಾರಿಗೊಳಿಸುವುದು ಅತ್ಯಂತ ಬೇಜವಾಬ್ದಾರಿತನವಾಗುತ್ತದೆ ಬಿಬಿಎಂಪಿಯಲ್ಲಿ ಈಗ ಆಡಳಿತಾಧಿಕಾರಿಗಳ ಆಡಳಿತವಿದೆ ಬಿಬಿಎಂಪಿಗೆ ಚುನಾವಣೆ ನಡೆದು ಜನರ ಅಭಿಪ್ರಾಯವನ್ನು ಸಭೆಯಲ್ಲಿ ಚರ್ಚಿಸಿ ಇಂತಹ ಸಾಧಕ ಬಾಧಕಗಳ ಬಗ್ಗೆ ಕಾರ್ಯಕ್ರಮವನ್ನ ಜಾರಿಗೊಳಿಸಬೇಕು ಏಕಾಏಕಿ ಜನವಿರೋಧಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಬಿಜೆಪಿ ಸರ್ಕಾರ ಜನರಿಗೆ ಆರ್ಥಿಕ ಹೊರೆಯನ್ನು ಹಾಕಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಕೂಡಲೇ ಈ ಎಲ್ಲ ನೀತಿಗಳನ್ನು ಕೈ ಬಿಟ್ಟು ಪಾಲಿಕೆ ಚುನಾವಣೆ ನಡೆದ ನಂತರ ಪಾರ್ಕಿಂಗ್ ಶುಲ್ಕದ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಬೇಕೆಂದು ಸರ್ಕಾರ ತಂದಿರುವ ಈ ನೀತಿಯನ್ನು ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಈ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಮನೋಹರ್, ಜಿ ಜನಾರ್ದನ್, ಎ. ಆನಂದ್, ಇ. ಶೇಖರ್, ಪ್ರಕಾಶ್, ಆದಿತ್ಯ, ಉಮೇಶ್ , ಪುಟ್ಟರಾಜ್, ಚಂದ್ರಶೇಖರ್, ದೀಪಕ್, ಶಶಿಭೂಸಣ್, ಶ್ರೀಮತಿ ಶೀಲಾ ಪಕ್ಷದ ಮುಖಂಡರುಗಳಾದ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಸಿಸಿಲ್ ಸೋಮನ್