Regional

ಬನವಾಸಿ ರೋಪ್ ಸಾಹೇಬರು ಡಾಕ್ಟರ್ ಆದ ಕಥೆ.

ಬನವಾಸಿ ರೋಪ್ ಸಾಹೇಬರು ಡಾಕ್ಟರ್ ಆದ ಕಥೆ.


ಬನವಾಸಿ ರೋಪ್ ಸಾಹೇಬರು ಡಾಕ್ಟರ್ ಆದ ಕಥೆ.

ಇವರಿಗೆ ಕನಾ೯ಟಕದ ಪೈನಾಪಲ್ ಕಿಂಗ್ ಎಂಬ ಅನ್ವಥ೯ ನಾಮವೂ ಇದೆ, ಇವರ ಸಾದನೆ ಆ ಮಟ್ಟದ್ದು.
ಉ.ಕ.ಜಿಲ್ಲೆಯ ಬನವಾಸಿಯ ಇವರಿಗೆ 2006ರಲ್ಲಿ ದಾರವಾಡದ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದ್ದು ದೊಡ್ಡ ಸುದ್ದಿ ಆಗಿತ್ತು.
ಈಗೆಲ್ಲ ಡಾಕ್ಟರೇಟ್ ಅಗ್ಗ ಆದರೆ ಅವಾಗ ಅದಕ್ಕೆ ಘನತೆ ಇತ್ತು.
ರೋಪ್ ಸಾಹೇಬರಿಗೆ ಡಾಕ್ಟರೇಟ್ ಕೊಟ್ಟ ಬಗ್ಗೆ ಅಪಸ್ವರವೂ ಇತ್ತು ಕಾರಣ ಇವರು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ವಿಪರೀತ ಅಂತ.
ಇವರನ್ನ ಬೇಟಿ ಮಾಡಲೇ ಬೇಕೆಂದು ಯೋಚಿಸುವಾಗಲೇ ಸೊರಬ ಮೂಲದ ಸಾಗರ ತಾಲ್ಲೂಕಿನ ಭೂ ಅಭಿವೃದ್ದಿ ಬ್ಯಾಂಕಿನ ಉದ್ಯೋಗಿ ಆಗಿದ್ದ ಜಾನಕಪ್ಪನವರು ಡಾಕ್ಟರ್ ರೋಪ್ ಸಾಹೇಬರ ಸಾದನೆ ಬಗ್ಗೆ ಹೇಳಿದಾಗ ನನಗೆ ಅವರ ಹತ್ತಿರ ಕರೆದೊಯ್ದು ಪರಿಚಯಿಸಲು ವಿನಂತಿಸಿದ್ದೆ.
ನಿಗದಿತ ಬೆಳಿಗ್ಗೆ ಸೊರಬ ಮಾಗ೯ವಾಗಿ ಬನವಾಸಿ ತಲುಪಿ ಅವರ ಮನೆಯಲ್ಲಿ ಅವರ ಅಗಮನಕ್ಕೆ ಕಾಯುವಾಗ ಮುಂಬೈನ ನನ್ನ ಗೆಳೆಯ ವಿಜಯ್ ಗಡ್ಕರ್ ಅವರ ಮನೆಯ ಡೈನಿಂಗ್ ಹಾಲ್ ನಿಂದ ಬಂದಾಗ ಇಬ್ಬರಿಗೂ ಆಶ್ಚಯ೯.
ಹಿಂದೆಯೇ ಬಂದ ರೋಪ್ ಸಾಹೇಬರಿಗೂ, ನನ್ನ ಗೆಳೆಯ ಅವರ ಅನಾನಸ್ ಹಣ್ಣಿನ ಸಂಸ್ಕರಣ ಘಟಕದ ಯಂತ್ರೋಪಕರಣ ಸರಬರಾಜು ಮಾಡಿದ್ದ ಕಾರಣ ಅವರ ಅತಿಥಿ ಆಗಿದ್ದರು ಇದರಿಂದ ರೋಪ್ ಸಾಹೇಬರ ನನ್ನ ಪರಿಚಯ, ಚಚೆ೯ ಸರಾಗವಾಯಿತು.
ಎಕರೆ ಒ0ದರಲ್ಲಿ ಸರಾಸರಿ 30 ಟನ್ ಅನಾನಸ್ ಬೆಳೆ ತೆಗೆಯುವ ಇವರ ವಿಧಾನವೇ ಬಿನ್ನ, ಇವರಿಂದ ಅನಾನಸ್ ಬೆಳೆಯ ಹಬ್ ಆಗಿದೆ ಬನವಾಸಿ.
ಅನಾನಸ್ ಒಯ್ಯಲು ದೂರದ ದೆಹಲಿ ಪಂಜಾಬಿನಿಂದ ಖರೀದಿದಾರರು ಬರುತ್ತಾರೆ.
ಇವರದ್ದೇ ಸ್ವಂತ ಅನಾನಸ್ ಹಣ್ಣು ಸಂಸ್ಕರಣ ಘಟಕ ಸ್ಥಾಪಿಸಿದ್ದಾರೆ ದಿನಕ್ಕೆ 10 ರಿಂದ 20 ಟನ್ ಸಂಸ್ಕರಣ ಮಾಡುತ್ತದೆ.
ಇವರ ಪುತ್ರ ಸಿಸಿ೯ ರಸ್ತೆಯಲ್ಲಿ ಇನ್ನೊಂದು ಸಂಸ್ಕರಣ ಘಟಕ ಸ್ಥಾಪಿಸಿದ್ದಾರೆ.
ಇವರ ಕೃಷಿ ವಿದಾನ ವಿಬಿನ್ನ ನೂರಾರು ಎಕರೆ ಕುಷ್ಕಿ ಜಮೀನು ಅನಾನಸ್ ಬೆಳೆಯಲು ಗುತ್ತಿಗೆಗೆ ಪಡೆಯುತ್ತಾರೆ ಅಲ್ಲಿ ನೀರಿಗಾಗಿ ಬೋರ್ ವೆಲ್ ತೆಗೆಸುತ್ತಾರೆ ನಂತರ ದೊಡ್ಡ ಮಟ್ಟದ ಅನಾನಸ್ ಕೃಷಿ ಪ್ರಾರಂಬಿಸುತ್ತಾರೆ, ಅನಾನಸ್ ಬೆಳೆ ತೆಗೆದು ಲಾಭದಿಂದ ಅದೇ ಜಮೀನು ಖರೀದಿಸಿ ಬಾಳೆ ಹಾಕಿ ಅದರ ಮಧ್ಯ ಅಡಿಕೆ ಹಾಕುತ್ತಾರೆ ಆರೇಳು ವರ್ಷದಲ್ಲಿ ಅದನ್ನು ಅತ್ಯುತ್ತಮ ಅಡಿಕೆ ತೋಟವಾಗಿ ಬದಲಿಸಿಬಿಡುವ ಕುಶಾಗ್ರಮತಿ ಅವರು.
2007 ರಲ್ಲಿ ಅವರ ಹಿಡಿತದಲ್ಲಿ 2000 ಎಕರೆಗೂ ಹೆಚ್ಚಿನ ಜಮೀನು ಅನಾನಸ್, ಬಾಳೆ ಮತ್ತು ಅಡಿಕೆ ಬೆಳೆ ಇತ್ತು.
ಅವರ ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬಂದದ್ದು, ಸುರಿಗಿ ಹೂವಿನ ದಂಡೆ ಮಾರಿ ಜೀವನ ಮಾಡಿದ್ದು ನೆನಪಿಸಿಕೊಂಡಾಗ ಅವರ ಕಣ್ಣು ತೇವ ಆಗಿತ್ತು.
ಪ್ರಾಥಮಿಕ ಶಿಕ್ಷಣವೂ ಪೂಣ೯ ಮಾಡಲಾಗದ ಬಡತನ ಈಗಿನ ಕೃಷಿ ಸಾಹಸದಿಂದ ಕೃಷಿ ವಿಶ್ವವಿದ್ಯಾಲಯ ಒ೦ದು ಗೌರವ ಡಾಕ್ಟರೇಟ್ ಕೊಡುವ ಮಟ್ಟಕ್ಕೆ ಬೆಳೆದಿದ್ದನ್ನ ಸ್ವತಃ ಅವರೇ ಅವರು 1972 ರಲ್ಲಿ ಖರೀದಿಸಿದ ಹಳ್ಳಿ ಕೊಪ್ಪದ ತೋಟದಲ್ಲಿ ವಿವರಿಸಿ ನಮಗೆಲ್ಲ ಎಳನೀರು ಕುಡಿಸಿ, ತಿನ್ನಲು ಅನಾನಾಸ್ ಕೊಟ್ಟು ಜೊತೆಗೆ ಸಂಸ್ಕರಿಸಿದ ಅನಾನಸ್ ಟಿನ್ ಗಳನ್ನ ಕೊಟ್ಟಿದ್ದು ಮೊನ್ನೆ 16 ಅಕ್ಟೋಬರ್ 2020 ರಂದು ಡಾಕ್ಟರ್ ರೋಪ್ ಸಾಹೇಬರು ಇಹ ಲೋಕ ತ್ಯಜಿಸಿದ ಸುದ್ದಿ ತಿಳಿದಾಗ ನೆನಪಾಯಿತು.
ಇವರ ಹತ್ತಿರ ಅವತ್ತು ದಾಸ್ತಾನಿದ್ದ ಕಾಳು ಮೆಣಸು ಒ0ದು ಸಾವಿರ ಕ್ವಿಂಟಾಲ್ ಗೂ ಹೆಚ್ಚು.
ಕೃಷಿ ಒಂದನ್ನ ಕೈಗಾರಿಕೆ ಮಾಡಿ ಯಶಸ್ವಿ ಆದ ಡಾಕ್ಟರ್ ಅಬ್ದುಲ್ ರೋಪ್ ಅಬ್ದುಲ್ ಕರೀಂ ಶೇಖ್ ಬನವಾಸಿ ಇನ್ನು ನೆನಪು ಮಾತ್ರ ಆದರೆ ಅವರ ಕೃಷಿ ಸಾಧನೆ ಮುಂದಿನ ತಲೆಮಾರಿಗೂ ಒಂದು ಸಾಧನೆಯ ಕೈಪಿಡಿ ಆಗಿದೆ.
ರಾಜ್ಯದ ಅನಾನಸ್ ಹಣ್ಣಿನ ಕಿಂಗ್ ರ ಸಾಧನೆ ಸಣ್ಣದಲ್ಲ.

ಲೇಖನ: ಅರುಣ್ ಪ್ರಸಾದ್

Click to comment

Leave a Reply

Your email address will not be published.

5 × 2 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App

© 2018 | All Rights Reserved

To Top
WhatsApp WhatsApp us