ದೈವಭಕ್ತನಾಗಿರುವ ಡಿಕೆ ಶಿವಕುಮಾರ್ ಅವರಿಗೆ ನೊಣವಿನಕೆರೆ ಅಜ್ಜಯ್ಯರ ಬಗ್ಗೆ ಬಹಳ ನಂಬಿಕೆ. ಬೆಂಗಳೂರಿನ ನಾಗರಭಾವಿಯ ಮಾರೇನಹಳ್ಳಿಯಲ್ಲಿರುವ ಅಜ್ಜಯ್ಯನವರನ್ನ ಭೇಟಿ ಮಾಡಿ ಆರ್.ಆರ್. ನಗರದ ಅಭ್ಯರ್ಥಿ ಸಮಸ್ಯೆಗೆ ಪರಿಹಾರ ಕೇಳಿದರಂತೆ. ಆಗ ಅಜ್ಜಯ್ಯನವರು ಮುನಿರತ್ನಗೆ ಸ್ತ್ರೀಕಂಟಕ ಇದ್ದು ಅವರ ಎದುರು ಮಹಿಳಾ ಅಭ್ಯರ್ಥಿಯೊಬ್ಬರನ್ನು ನಿಲ್ಲಿಸುವಂತೆ ಸೂಚಿಸಿದರಂತೆ. ಐಎಎಸ್ ಅಧಿಕಾರಿ ದಿವಂಗತ ಡಿಕೆ ರವಿ ಅವರ ಹೆಂಡತಿ ಕುಸುಮಾ ರವಿ ಕಾಂಗ್ರೆಸ್ ಪಕ್ಷ ಸೇರಿದ್ದು ಅವರು ಆರ್.ಆರ್. ನಗರ ಕ್ಷೇತ್ರದಲ್ಲಿ ಆ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ, ಕಾಂಗ್ರೆಸ್ಗೆ ಯಾವ ಪರಿಸ್ಥಿತಿ ಬಂದಿದೆ ನೋಡಿ ಎಂದು ಮರುಗಿದರು. ಯಾರೋ ನೊಣವಿನಕೆರೆ ಅಜ್ಜಯ್ಯ ಹೇಳಿದರು ಅಂತ ಆ ಹುಡುಗಿಯನ್ನ ಆರ್.ಆರ್. ನಗರಕ್ಕೆ ಅಭ್ಯರ್ಥಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಬಗ್ಗೆ ಮರುಕ ವ್ಯಕ್ತಪಡಿಸಿದ್ದು.
ಕಾಂಗ್ರೆಸ್ಗೆ ರೇವಣ್ಣ ಚುಚ್ಚುಮಾತು..
By
Posted on