ಬೆಂಗಳೂರು : ಕೇಂದ್ರ ಬಿಜೆಪಿ ಸರ್ಕಾರ ಎಲ್ ಪಿಜಿ ದರವನ್ನು ಏರಿಕೆ ಮಾಡುವುದರ ಮೂಲಕ ಸಬ್ಸಿಡಿ ಕಡಿತ ಗೊಳಿಸಿ 1ತಿಂಗಳ ಅವಧಿಯಲ್ಲಿ ನೂರು ರೂ ಹೆಚ್ಚುವರಿ ಹಣವನ್ನು ಗ್ರಾಹಕರಿಂದ ವಸೂಲು ಮಾಡಿ ಜನರ ಮೇಲೆ ಹೊರೆ ಹಾಕುತ್ತಿದೆ ಹಾಗೂ ನಿರಂತರವಾಗಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿ ವಾಹನ ಸವಾರರಿಗೆ ತೀವ್ರ ಸಂಕಷ್ಟ ತಂದಿದೆ.

ಈ ದೇಶದ ಅನ್ನದಾತರು ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿಯ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಪ್ರತಿಭಟನೆ ಕಡೆ ಗಮನಹರಿಸದೆ ರೈತರ ಸಾವನ್ನು ನಿರ್ಲಕ್ಷಿಸಿ ದಿನನಿತ್ಯ ಪ್ರಚಾರದಲ್ಲಿ ತೊಡಗಿದ್ದಾರೆ ಇವರ ವರ್ತನೆಯನ್ನು ಹಾಗೂ ಜನವಿರೋಧಿ ನೀತಿಯನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಸಲಾಯಿತು ಕೂಡಲೇ ದರ ಕಡಿತಗೊಳಿಸಬೇಕೆಂದು ಸಹ ಆಗ್ರಹಿಸಲಾಯಿತು. ಅಚ್ಚೇದಿನ್ ಸಬ್ಕಾ ಸಾತ್ ಘೋಷಣೆಯಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ದೇಶದ ಜನರ ಮೇಲೆ ನಿರಂತರವಾಗಿ ಸಾಲದ ಹೊರೆ ಹೊರಿಸುತ್ತಿದ್ದಾರೆ ಕೇವಲ ಪ್ರಚಾರಕ್ಕಾಗಿ ದಿನನಿತ್ಯ ಕಾಲಹರಣ ಮಾಡಿ ಜನರನ್ನು ವಂಚಿಸುತ್ತಿದ್ದಾರೆ ಕೂಡಲೇ ದರ ಏರಿಕೆಯನ್ನು ಕಡಿತಗೊಳಿಸಬೇಕು ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸದೆ ಕೇವಲ ಚುನಾವಣೆಗಳಲ್ಲಿ ಮಾತ್ರ ಭಾಗವಹಿಸಿ ಪ್ರಚಾರ ನಡೆಸಿ ಬಿಜೆಪಿ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ ಹೊರತು ದೇಶದ ಅಭಿವೃದ್ಧಿಗೆ ಕಿಂಚಿತ್ತೂ ಶ್ರಮವನ್ನು ನರೇಂದ್ರ ಮೋದಿ ಹಾಗೂ ಅವರ ತಂಡ ಶ್ರಮಿಸುತ್ತಿಲ್ಲ ಇಂತಹ ಬೇಜವಾಬ್ದಾರಿ ಸರ್ಕಾರ ಸ್ವಾತಂತ್ರ್ಯ ನಂತರ ಬಂದ ಮೊದಲ ಸರ್ಕಾರವಾಗಿದೆ ರೈತರ ಬೇಡಿಕೆಯನ್ನು ಈಡೇರಿಸಬೇಕು ರೈತ ವಿರೋಧಿ ಮಸೂದೆಯನ್ನು ಕೈಬಿಡಬೇಕೆಂದು ಆಗ್ರಹಿಸುತ್ತಿದ್ದರೂ ಕಿಂಚಿತ್ತೂ ಕಾಳಜಿ ವಹಿಸದೆ ಬೇಜವಾಬ್ದಾರಿತನವನ್ನು ಕೇಂದ್ರ ಬಿಜೆಪಿ ಸರ್ಕಾರ ನಡೆಸುತ್ತಿದ್ದೆ ಕಾರ್ಮಿಕರು ಜನಸಾಮಾನ್ಯರು ರೈತರ ಮನವಿಗೂ ಸ್ಪಂದಿಸದೆ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಇವರು ಕೇವಲ ಚುನಾವಣೆ ಗೋಸ್ಕರ ಸೃಷ್ಟಿಯಾಗಿರುವ ಪ್ರಧಾನಿಮಂತ್ರಿ ಎಂಬುದು ಈಗ ಜಗಜ್ಜಾಹಿರವಾಗಿದೆ ಕೂಡಲೇ ದರ ಏರಿಕೆಯನ್ನು ಕಡಿತಗೊಳಿಸಿ ಜನಸಾಮಾನ್ಯರ ನೋವಿಗೆ ಮನವಿಗೆ ಸ್ಪಂದಿಸಬೇಕೆಂದು ಆಗ್ರಹಿಸಿ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥರಾದ ಎಸ್. ಮನೋಹರ್, ಜಿ. ಜನಾರ್ದನ್, ಎ. ಆನಂದ್, ಇ. ಶೇಖರ್, ಎಂ. ಎ. ಸಲೀಂ (ಮಾಧ್ಯಮ ಕಾರ್ಯದರ್ಶಿ), ಪ್ರಕಾಶ್, ಪುಟ್ಟರಾಜು, ಚಂದ್ರು, ಶಶಿಭೂಷಣ್, ಶ್ರೀಮತಿ ಶೀಲಾ ಮುಂತಾದವರು ಭಾಗವಹಿಸಿದ್ದರು.

ವರದಿ: ಸಿಸಿಲ್ ಸೋಮನ್
