ಸಾಗರ: ನಾ ಕಂಡ ಯಡಿಯೂರಪ್ಪ – ಹೆಚ್.ಹಾಲಪ್ಪ ಹರತಾಳು

ನಾ ಕಂಡ ಯಡಿಯೂರಪ್ಪ ಈ ನಿಷ್ಕಲ್ಮಶ ನಗುವಿನಲ್ಲಿ ಅದೆಷ್ಟು ಹೋರಾಟಗಳಿವೆಯೋ, ಅದೆಷ್ಟು ನೋವು- ಅನುಭವಿಸಿದ ಮೋಸಗಳಿವೆಯೋ ಹೇಳತೀರದು. ಗೆದ್ದಲು ಕಟ್ಟಿದ ಹುತ್ತದೊಳಗೆ ಹಾವುಗಳು ಬಂದು ಸೇರಿಕೊಳ್ಳುವಂತೆ ಅನೇಕರು ಕಟ್ಟಿ ಬೆಳೆಸಿದ ಪಕ್ಷದೊಳೆಗೆ ಇನ್ಯಾರೋ ಬಂದು ಅಧಿಕಾರ ಚಲಾಯಿಸುತ್ತಾರೆ. ದಕ್ಷಿಣ ಭಾರತದಲ್ಲಿ (ಕರ್ನಾಟಕ) ಜನಸಂಘ/ಬಿಜೆಪಿ ಎಂಬ ಸಸಿ ಆಗಿನ್ನೂ ಮೊಳಕೆಯೋಡಿಯುತ್ತಿದ್ದ ಸಮಯದಲ್ಲಿ ಅದಕ್ಕೆ ಸಿಕ್ಕಂತಹ ತಾಯಿಬೇರು ಯಡಿಯೂರಪ್ಪ ಎಂಬ ಹೆಸರಾದರೆ, ಖಾಂಡವಾಗಿದ್ದು ದಿ|| ಅನಂತಕುಮಾರ್. ಕಾರ್ಯಕರ್ತರನ್ನು ಬಡಿಬೆಬ್ಬಿಸಿ ಅನ್ಯಾಯ ಕಂಡಲ್ಲಿ ಹೋರಾಟ ಮಾಡುತ್ತಾ ಜನರಿಗೆ ಸ್ಥರ್ಯ ತುಂಬಿ,ನ್ಯಾಯ ದೊರಕಿಸುತ್ತ ಸಹಜ ಹೋರಟಗಾರನಾಗಿ ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿದ ಹೆಸರು ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಎಂಬ ಛಲದಂಕಮಲ್ಲ.

ದೇವರಾಜ್ ಅರಸು, ಗುಂಡುರಾವ್, ರಾಮಕೃಷ್ಣ ಹೆಗ್ಡೆ, ನಿಜಲಿಂಗಪ್ಪ,ಜೆ.ಹೆಚ್.ಪಟೇಲ್,ಬಂಗಾರಪ್ಪ,ದೇವೇಗೌಡ. ಎಂಬ ರಾಜಕೀಯ ಮೇರು ಪರ್ವತಗಳ ಎದುರು ತನ್ನದೆಯಾದ ಕಾರ್ಯಕರ್ತರ ಸಾಮ್ರಾಜ್ಯ ಕಟ್ಟುತ್ತಾ ತಳ ಹಂತದಿಂದ ಪಕ್ಷಕಟ್ಟಿ ಯಾವತ್ತೂ ಅವಕಾಶವಾದಿ ರಾಜಕಾರಣ ಮಾಡದೆ, ಮೊದಲಬಾರಿಗೆ 2 ಅಂಕಿಯಿಂದ ಪ್ರಾರಂಭವಾದ ಬಿಜೆಪಿಯ ಗೆಲುವಿನ ಅಭಿಯಾನ 40ರ ಗಡಿಗೆ ಬಂದು ನಿಂತಾಗ, 2004 ರಲ್ಲಿ ಬಂಗಾರಪ್ಪ ನವರು ಬಿಜೆಪಿ ಸೇರ್ಪಡೆಯಾದಾಗ 79 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಆ 79 ಶಾಸಕರಲ್ಲಿ ನಾನು ಒಬ್ಬನಾಗಿದ್ದೆ ಬಂಗಾರಪ್ಪ ನವರು ಬಿಜೆಪಿ ಪಕ್ಷ ತೊರೆದಾಗ ಇನ್ನೇನು ಬಿಜೆಪಿ ಸ್ಥಿತಿ ಡೋಲಾಯಮಾನವಾಗಿ ಹೋಯ್ತು, ಇನ್ನು ಬಿಜೆಪಿ ನೆಲ ಕಚ್ಚಿತ್ತು ಎಂಬ ಮಾತುಗಳು ಆರಂಭವಾದಾಗ, ಸಮಿಶ್ರ ಸರ್ಕಾರದ ಭಾಗವಾಗಿ ಉಪಮುಖ್ಯಮಂತ್ರಿ ಗಳಾದ ಯಡಿಯೂರಪ್ಪ ನವರು, ನಂತರ 20-20 ಸರ್ಕಾರದ ಕೊನೆ ಅವಧಿಗೆ ಮುಖ್ಯಮಂತ್ರಿ ಗಳಾದರು ಜೆಡಿಎಸ್ ನವರ ಮೋಸಕ್ಕೆ ಬೇಸತ್ತು ಮೈತ್ರಿಯಿಂದ ಹೊರಬಂದು ಪಕ್ಷಕ್ಕೆ ಯಾವುದೇ ಕುಂದು ಬಾರದಂತೆ ಪಕ್ಷವನ್ನು ತನ್ನ ಸದೃಢ ನಾಯಕತ್ವದಲ್ಲಿ ಮುನ್ನೆಡೆಸಿ 2008 ರ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ತನ್ನ ರಾಜಕೀಯ ಚಾಣಾಕ್ಷತೆ, ತನ್ನ ಸಾಮರ್ಥ್ಯವನ್ನು ನಿರೂಪಿಸಿ, ಸರ್ಕಾರ ಸುಭದ್ರವಾಗಲು ಮತ್ತೆ ನೆಡೆದ ಉಪಚುನಾವಣೆಗಳಲ್ಲಿ ಗೆದ್ದು ಬಹುಮತದ ಸರ್ಕಾರ ರಚಿಸಿದರು.

ತಮ್ಮ ಸಂಪುಟದಲ್ಲಿ ನನ್ನನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಂತ್ರಿಯನ್ನಾಗಿಸಿದ್ದು ಯಡಿಯೂರಪ್ಪ ನವರ ಜ್ಯಾತ್ಯತೀತ ನಿಲುವಿಗೆ ಹಾಗೂ ಸಣ್ಣ ಸಮುದಾಯಗಳನ್ನು ಮುನ್ನೆಲೆಗೆ ತರುವ ರಾಜಕೀಯ ಇಚ್ಛಾಶಕ್ತಿ ಗೆ ಹಿಡಿದ ಕೈಗನ್ನಡಿಯಾಗಿದೆ. ಆನಂತರ ನೆಡೆದ ರಾಜಕೀಯ ವಿಪ್ಲವಗಳಿಂದ ಮನನೊಂದು ತಾನು ಬೆವರು ಸುರಿಸಿ ಬೆಳೆಸಿದ ಪಕ್ಷದಿಂದ ಹೊರಬಂದು ಕೆ.ಜೆ.ಪಿ ಸ್ಥಾಪಿಸಿ ಕೆಲ ತಿಂಗಳುಗಳಲ್ಲಿ ನೆಡೆದ ಚುನಾವಣೆಯಲ್ಲಿ ಶೇ 10% ಮತಗಳನ್ನು ಪಡೆದು ತನ್ನ ಸಾಮರ್ಥ್ಯವನ್ನು ನಿರೂಪಿಸಿದನ್ನು ರಾಜಕೀಯ ಎನ್ನುವ ಪುಸ್ತಕದಲ್ಲಿ ಬರೆದಿಡುವಂತಹ ಸಾಧನೆ ಮಾಡಿದ್ದು ವಿರೋಧಿಗಳ ಎದೆಯಲ್ಲಿ ಇನ್ನು ಮಾಸದಂತೆ ಅಚ್ಚುಳಿದಿದೆ. ನಂತರ ಬಿಜೆಪಿ ಸೇರ್ಪಡೆಯಾಗಿ 2014 ರ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಮೂಲಕ ಮೋದಿಯ ನಾಯಕತ್ವವೇ ಸೂಕ್ತ ಎಂದು ಮೊಟ್ಟ ಮೊದಲು ಉಚ್ಚರಿಸಿದ ನಾಯಕ BSY. 76 ರ ಹರೆಯದಲ್ಲಿ ಯುವಕರು ನಾಚಿಸುವಂತ ಓಡಾಟ ಸದಾ ಅಭಿವೃದ್ಧಿ ಪರ ಚಿಂತನೆಗಳು, ರೈತ ಪರ ನಿಲುವುಗಳು 2018 ರ ಚುನಾವಣೆಯಲ್ಲಿ ಮತ್ತೆ ಯಡಿಯೂರಪ್ಪ ನವರನ್ನು ಮುಖ್ಯಮಂತ್ರಿ ಯನ್ನಾಗಿ ನೋಡಬೇಕೆನ್ನುವ ಜನರು ಹಂಬಲಿಸುತ್ತಿದ್ದರು. ತನ್ನನ್ನು ನಂಬಿದವರನ್ನು ಎಂದು ಕೈಬಿಡದ ಯಡಿಯೂರಪ್ಪ ನವರು ಸಾಗರ ಕ್ಷೇತ್ರದಲ್ಲಿ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸವಿಟ್ಟು ಹಲವರ ವಿರೋದದ ನಡುವೆ ಟಿಕೆಟ್ ನೀಡಿ ನನ್ನ ಕೈ ಹಿಡಿದರು. ರಾಜ್ಯದಲ್ಲಿ ಅಂದಿನ ಚುನಾವಣಾ ಫಲಿತಾಂಶ ಬಿಜೆಪಿಯನ್ನು ಅದಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿತು. ( ಯಡಿಯೂರಪ್ಪ ನವರಿಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದಾರೆ ಒಂದೂವರೆ ವರ್ಷ ವಿರೋಧಪಕ್ಷದಲ್ಲಿ ಕೂರುವ ಸ್ಥಿತಿ ಬರುತ್ತಿರಲಿಲ್ಲ ) ಅನಂತರ ನೆಡೆದ ರಾಜಕೀಯ ಪಗಡೆಯಾಟದಲ್ಲಿ ವಾಚಾಮಗೋಚರವಾಗಿ ಬೈದಾಡಿಕೊಂಡಿದ್ದವರು ಸರ್ಕಾರ ರಚಿಸಿ ಜನರ ಭಾವನೆಗಳಿಗೆ ಧಕ್ಕೆ ತಂದರು. ಇವರ ಉಪಟಳಗಳನ್ನು ಸಹಿಸದ ಕೆಲ ಶಾಸಕರು ಬಂಡಾಯವೇದ್ದು ಸರ್ಕಾರ ಕೆಡವಿದರು. ತನ್ನ ಅವಕಾಶವಾಧಿ ರಾಜಕಾರಣದಿಂದ ಸ್ವಯಂ ಘೋಷಿತ ಸಭ್ಯಸ್ತರು ಅನರ್ಹರು ಎಂಬ ಹಣೆಪಟ್ಟಿ ನೀಡಿದರು. ನಂತರದ ಘಟನೆಗಳು ಜನರ ಕಣ್ಮುಂದಿದೆ, 4ನೇ ಬಾರಿ ಮುಖ್ಯಮಂತ್ರಿಯಾಗಿ ಎದುರಿಸಿದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಗೆದ್ದು ವಿರೋಧಿಗಳನ್ನು ರಾಜ್ಯದ ಜನತೆ ಎದುರು ಬೆತ್ತಲೆ ನಿಲ್ಲಿಸಿ ಇತಿಹಾಸ ನಿರ್ಮಿಸಿದ ಕೀರ್ತಿ ಯಡಿಯೂರಪ್ಪ ನವರದ್ದು ಗಾಡ್ ಫಾದರ್ ಇಲ್ಲದೆ ಬೆಳೆದು ಬಂದು, ನನ್ನಂತಹ ಅನೇಕ ರಾಜಕಾರಣಿಗಳ ಬಾಳಿಗೆ ಗಾಡ್ ಫಾದರ್ ಆದ ಯಡಿಯೂರಪ್ಪ ನವರ ಯಶಸ್ಸಿನ ಜೀವನ ಘಾತೆ.2009ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಕಳಪೆ ಪ್ರದರ್ಶನ ಮಾಡಿದ್ದಾಗ ಕರ್ನಾಟಕದಿಂದ 19 ಸಂಸದರನ್ನು ಕಳುಹಿಸಿ ಕೊಟ್ಟಿದ್ದ ಯಡಿಯೂರಪ್ಪನವರಿಗೆ ಅಂದು ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರಿಂದ ತುಂಬಿದ ಸಭೆಯಲ್ಲಿ ಪುಷ್ಪಗುಚ್ಚ ನೀಡಿ ವಿಶೇಷ ಸನ್ಮಾನಿಸಿದ್ದರು, 2019 ರ ಲೋಕಸಭೆಯಲ್ಲಿ 25 ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ಒಂಟಿಯಾಗಿ ಸಮರ್ಥ ನಾಯಕತ್ವದಲ್ಲಿ 12 ಸ್ಥಾನ ಗೆಲ್ಲಿಸಿದಕ್ಕಾಗಿ ಇಂದು ನರೇಂದ್ರ ಮೋದಿಯವರಿಂದ ಸ್ಟ್ಯಾಂಡಿಂಗ್ ಅವಿಯೇಶನ್” ಮೂಲಕ ಯಡಿಯೂರಪ್ಪನವರಿಗೆ ಎಲ್ಲಾ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದ್ದಾರೆ. ಈಗ ಹೇಳಿ ರಾಜ್ಯ ಆಳೋಕೆ ವಯಸ್ಸು ಬೇಡ, ಸಮರ್ಥ ನಾಯಕತ್ವ ಸಂಘಟನೆ ಚತುರತೆ ಇದ್ದರೆ ಸಾಕು. ಇನ್ನಾದರೂ ವಿರೋಧಿಸುವವರು,ವಿಪಕ್ಷಗಳು, ದುರಹಂಕಾರಿ ಮಾತುಗಳಾಡುವವರು ಅರಿತು ನೆಡೆದರೆ ಒಳ್ಳೆಯದು. …. ಹೆಚ್.ಹಾಲಪ್ಪ ಹರತಾಳು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
