ಸಾಗರ: ಕೋಟಾ ಶ್ರೀನಿವಾಸ ಪೂಜಾರಿಯವರ ಬಗ್ಗೆ ಗೋಪಾಲಕೃಷ್ಣ ಬೇಳೂರು ಹಗುರ ಹೇಳಿಕೆ ಸಾಗರ ತಾಲ್ಲೂಕು ಬಿಲ್ಲವ ಸಮಾಜ ಖಂಡನೆ – ಬಿಲ್ಲವ ಸಮಾಜದ ಅಧ್ಯಕ್ಷ ನಾಗರಾಜ್ ಪ್ರಶ್ನೆ.
ಕೋಟಾ ಶ್ರೀನಿವಾಸ ಪೂಜಾರಿಯವರ ಬಗ್ಗೆ ಗೋಪಾಲಕೃಷ್ಣ ಬೇಳೂರು ಹಗುರ ಹೇಳಿಕೆ ಸಾಗರ ತಾಲ್ಲೂಕು ಬಿಲ್ಲವ ಸಮಾಜ ಖಂಡನೆ, ಗೋಪಾಲಕೃಷ್ಣ ಬೇಳೂರುರವರೇ ನೀವು ಯಾವ ಯೂನಿವರ್ಸಿಟಿಯಲ್ಲಿ ಡಿಗ್ರಿ ಪಡೆದಿದ್ದೀರಿ-ಬಿಲ್ಲವ ಸಮಾಜದ ಅಧ್ಯಕ್ಷ ನಾಗರಾಜ್ ಪ್ರಶ್ನೆ
ಮಾನ್ಯ ಗೋಪಾಲಕೃಷ್ಣ ಬೇಳೂರು ರವರಿಗೆ ಮೈಕ್ ಸಿಕ್ಕರೆ ಏನು ಮಾತನಾಡುತ್ತೇವೆ ಎಂಬ ಪರಿಜ್ಞಾನ ಇಲ್ಲ. ರಾಜ್ಯದಲ್ಲಿ ಮೂರು ಬಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ನಿಮುಗಿದೇಯೆ ಎಂದು ಬಿಲ್ಲವ ಸಮಾಜದ ಮುಖಂಡ ನಾಗರಾಜ್ ಇಂದು ಖಾರವಾಗಿ ಮಾತನಾಡಿದ್ದಾರೆ.
ಅವರು ಇಂದು ಪತ್ರಿಕಾಭವನದಲ್ಲಿ ಸೊರಬದಲ್ಲಿ ಇತ್ತಿಚೆಗೆ ನಡೆದ ಈಡಿಗ ಸಮುದಾಯ ಭವನದ ಶಂಕುಸ್ಥಾಪನಾ ಸಮಾರಂಭದಲ್ಲಿ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಏಕವಚನದಲ್ಲಿ ಮಾತನಾಡಿದ ಗೋಪಾಲಕೃಷ್ಣ ಬೇಳೂರುರವರ ನಡೆಯನ್ನು ಖಂಡಿಸಿ ಪತ್ರಿಕಾಗೋಷ್ಠಿಯಲ್ಲಿ ಈ ಮೇಲಿನಂತೆ ಮಾತನಾಡಿದರು.
ಗ್ರಾಮ ಪಂಚಾಯತಿ ಸದಸ್ಯರಾಗಿ, ಅಧ್ಯಕ್ಷರಾಗಿ, ತಾ.ಪಂ. ಸದಸ್ಯರಾಗಿ, ಅಧ್ಯಕ್ಷರಾಗಿ, ಜಿ.ಪಂ.ಸದಸ್ಯರಾಗಿ, ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಕಾರಣ ಶ್ರೀನಿವಾಸ ಪೂಜಾರಿಯವರು ಮೂರು ಬಾರಿ ಎಂಎಲ್ಸಿಯಾಗಿ ಆಯ್ಕೆಯಾಗಿದ್ದಾರೆ ಎಂಬುದನ್ನು ಗೋಪಾಲಕೃಷ್ಣ ಬೇಳೂರು ಮುಂಂಚೆ ತಿಳಿದುಕೊಳ್ಳಲಿ ಎಂದು ಹೇಳಿದರು.
ಬಂಗಾರಪ್ಪನವರ ಹೆಸರಿನ ಅಡಿಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಂದ ಗೋಪಾಲಕೃಷ್ಣರೇ ನೀವು ಅವರ ಬೆನ್ನಿಗೆ ಚೂರಿ ಹಾಕಲಿಲ್ಲವೇ?, ನಂತರ ಯಡಿಯೂರಪ್ಪ ಅವರ ಹೆಸರಿನಲ್ಲಿ ಆರಿಸಿ ಬಂದು ರೆಸಾರ್ಟ್ ರಾಜಕಾರಣ ಮಾಡಿದ್ದನ್ನು ಮರೆತಂತಿದೆ. ಪೂಜಾರಿ ನಮ್ಮ ಜಾತಿಯ ಕೋಟಾದಲ್ಲಿ ಮಂತ್ತಿಯಾಗಿದ್ದಾನೆ ಎಂದು ಹೇಳಿದರಲ್ಲ. ನೀವು ಪೂಜಾರಿ ಜಾತಿಯ ಹುಡುಗಿಯನ್ನೇಕೆ ಮದುವೆ ಆದೀರಿ ಎಂದು ಕೇಳಿದರು.
22 ಪಂಗಡಗಳು ಸೇರಿ ಈಡಿಗ ಸಮುದಾಯ ಎಂಬುವುದನ್ನು ಗೋಪಾಲಕೃಷ್ಣ ಮರೆಬಾರದು ಎಂದು ಸಹ ಹೇಳಿದ್ದಾರೆ.
ಪೂಜಾರಿ ಮತ್ತು ಧೀವರು ಅಂತ ಹೇಳಿ ಜಾತಿ ವೈಷಮ್ಮ ತರುತ್ತಿರುವವರು ಯಾರು ಎಂದು ಹೇಳಬೇಕು.
ಮುಂಬರುವ ದಿನಗಳಲ್ಲಿ ನಿಮ್ಮನ್ನು ಬೆಂಬಲಿಸಬೇಕು ಎಂದಿದ್ದ ಬಿಲ್ಲವ ಸಮುದಾಯದ ಸುಮಾರು ಹತ್ತರಿಂದ ಹದಿನೈದು ಸಾವಿರ ಮತಗಳು ನಿಮಗೆ ಬೇಡವೆಂದು ತೋರುತ್ತದೆ.
ನಿಮ್ಮಂತಹ ಹರುಕುಬಾಯಿಯವರನ್ನು ಕಾಂಗ್ರೇಸ್ ಪಕ್ಷ ವಕ್ತಾರರನ್ನಾಗಿ ಮಾಡಿರುವುದು ದುರಂತ ಎಂದು ಸಹ ಅವರು ಹೇಳಿದ್ದಾರೆ. ಹಾಗೇಯೇ ಅವರು ತಮ್ಮ ಈ ಹೇಳಿಕೆಗೆ ಬೇಷರ್ ಕ್ಷಮೆ ಯಾಚಿಸಬೇಕೆಂದು ಅವರು ಹೇಳಿದ್ದಾರೆ.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.